ಕಟೀಲು ಮಕ್ಕಳ ಮೇಳದ ಸಮಾರೋಪ, ಸಮ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಒಕ್ಟೋಬರ್ 21 , 2013
|
ಒಕ್ಟೋಬರ್ 21 , 2013
|
ಕಟೀಲು ಮಕ್ಕಳ ಮೇಳದ ಸಮಾರೋಪ, ಸಮ್ಮಾನ
ಕಟೀಲು :
ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಕಟೀಲು ಕ್ಷೇತ್ರ ದೊಡ್ಡ ಕೊಡುಗೆ ನೀಡಿದೆ. ಅದರಲ್ಲೂ ಮಕ್ಕಳಿಗೆ ಕಲೆಯ ಬಗ್ಗೆ ಆಸಕ್ತಿ ಬೆಳಸಿ ಮಕ್ಕಳ ಮೇಳ ಕಟ್ಟಿರುವುದು ಶ್ಲಾಘನೀಯ ಎಂದು ಮುಂಬಯಿ ಜ್ಯೋತಿಷಿ ಪೆರ್ಣಂಕಿಲ ಹರಿದಾಸ್ ಭಟ್ ಹೇಳಿದರು.
ಅವರು ಅ. 20ರಂದು ಕಟೀಲಿನ ರಥಬೀದಿಯಲ್ಲಿ ಶ್ರೀ ದುರ್ಗಾ ಮಕ್ಕಳ ಮೇಳದ ವಾರ್ಷಿಕ ಕಲಾಪರ್ವ ಸಮಾರೋಪ, ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
|
ಕಟೀಲು: ಕಲಾವಿದ ಜನಾರ್ದನ ಜೋಗಿ, ವಿಮರ್ಶಕ ಕೆ. ಎಲ್. ಕುಂಡಂತಾಯ, ಶ್ರೀಧರ ಡಿ.ಎಸ್. ಅವರನ್ನು ಸಮ್ಮಾನಿಸಲಾಯಿತು.
|
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಆಡಳಿತ ಮೊಕ್ತೇಸರ ಸೂರ್ಯನಾರಾಯಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಕಟೀಲು ಮೇಳದ ಹಿರಿಯ ಕಲಾವಿದ ಜನಾರ್ದನ ಜೋಗಿ ಅವರನ್ನು ಮಂಗಳೂರಿನ ಹೃದ್ರೋಗ ವೈದ್ಯ ಡಾ| ಪದ್ಮಾನಾಭ ಕಾಮತ್ ಅವರು ಸಮ್ಮಾನಿಸಿದರು. ಹಿರಿಯ ಪ್ರಸಂಗಕರ್ತ ಶ್ರೀಧರ ಡಿ.ಎಸ್. ಹಾಗೂ ಜಾನಪದ ವಿಮರ್ಶಕ ಕೆ.ಎಲ್. ಕುಂಡಂತಾಯ ಅವರನ್ನು ದೇವಳದ ಆಡಳಿತಾಧಿಕಾರಿ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಗೌರವಿಸಿದರು. ಹೈಟಕ್ ಸಂಸ್ಥೆ ಆಡಳಿತ ನಿರ್ದೇಶಕ ಬಿ.ಟಿ. ಬಂಗೇರ ಪ್ರಮಾಣ ಪತ್ರ ವಿತರಿಸಿದರು. ಉಡುಪಿ ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಗುರು ವಂದನೆ ನಡೆಸಿಕೊಟ್ಟರು. ಬಜಪೆ ಪಾಪ್ಯುಲರ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಜಗದೀಶ ಶೆಟ್ಟಿ ಮರವೂರು ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು.
ದೇವಳದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ಅರ್ಚಕ ಅನಂತಪದ್ಮಾನಾಭ ಆಸ್ರಣ್ಣ , ಕಮಲಾದೇವಿ ಪ್ರಸಾದ್ ಆಸ್ರಣ್ಣ, ಕಟೀಲು ಮೇಳದ ಸಂಚಾಲಕ ಕೆ. ದೇವಿಪ್ರಸಾದ್ ಶೆಟ್ಟಿ, ಮುಂಬಯಿ ಉದ್ಯಮಿಗಳಾದ ಗಣೇಶ್ ಶೆಟ್ಟಿ ಐಕಳ, ನಿಲೇಶ್ಶೆಟ್ಟಿಗಾರ್, ನೀಲಾಕ್ಷ ಕರ್ಕೇರಾ, ರಾಘವೇಂದ್ರ ಆಚಾರ್ ಬಜಪೆ, ಪಶುಪತಿಶಾಸ್ತ್ರಿ, ದಯಾನಂದ ಮಾಡ, ರಾಜೇಶ್ ಐ., ಕೃಷ್ಣ ಕೆ. ಮೊದಲಾದವರು ಉಪಸ್ಥಿತರಿದ್ದರು. ಮಕ್ಕಳ ಮೇಳದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಕೃಪೆ : http://vijaykarnataka.indiatimes.com/
|
|
|